ಒಂದು ವಿನಂತಿ

ಒಳಬನ್ನಿ ಗೆಳೆಯರೆ
ಇದು ಒಬ್ಬ ಕವೀಂದ್ರನ ಗೋರಿ
ಹುಸಿದಿದ್ದರೆ
ಕಸಿದಿದ್ದರೆ
ಮಾತಿಗೆ ತಪ್ಪಿ ತಪಿಸಿದ್ದರೆ
ಕಣ್ಣದೀಪ ಕಂಡವರ ಕಷ್ಟಕ್ಕೆ ಉರಿದು
ಎಂದಾದರೂ ಎರಡು ಹನಿ ಬೆಳಕ ಬಸಿದಿದ್ದರೆ
ರಾತ್ರಿ ರಾಮಾಯಣ
ಹಗಲು ಭಾರತ
ಬಾಳೆಲ್ಲ ರಗಳೆ ಹೂಡಿದ ಒಂದು ಬೃಹತ್ಕಥಾ
ರಸಕೃತಿ ಎನಿಸಿದ್ದರೆ
ಅಳುಕಿಲ್ಲದೆ ಬಂದು
ಸಮಾಧಿ ಮುಂದೆ ಮೊಳಕಾಲೂರಿ.
ಹುಟ್ಟಿ ಅಂತಃಕರಣ
ಕಟ್ಟಿ ಬಂದರೆ ಗಂಟಲು
ಇಕ್ಕಟ್ಟಿನಲ್ಲಿ ನಿಮ್ಮನ್ನೇ ಮೀರಿ
ಕವಿಗೆ ನಿಜಗೌರವ ತೋರಿ.

ಮಹನೀಯರೆ, ನೀವು ಅಲ್ಲೆ
ಹೊರಗೇಟಿನಲ್ಲೇ ನಿಲ್ಲಿ
ಮುರುಕಿಲ್ಲದೆ
ಬಿರುಕಿಲ್ಲದೆ
‘ಬಾಳಬಟ್ಟೆ’ ಎಳ್ಳಷ್ಟೂ
ಹರುಕಿಲ್ಲದೆ ‘ಪರಮಾಗಮ’
ಪಟ್ಟೆಯಾಗಿ ತೆರೆದಿದ್ದರೆ,
ಕಂಡಷ್ಟಕ್ಕೇ ಕಾಂಡ ಕೊಂಬೆ ನಿಜವಾಗಿ
ಕಾಣದಷ್ಟಕ್ಕೇ ಕತ್ತಲಬೇರು ಸುಳ್ಳಾಗಿದ್ದರೆ
ಬಾಡದೆ
ಕೋಡದೆ
ಬಾಳಿನ ಉದಯಾಸ್ತಕ್ಕೆ ಎದೆ
ಹಾಡದೆ ಇದ್ದರೆ, ನಿಲ್ಲಿ,
ನಿಮಗೆ ಮೈಲಿಗೆ ಇಲ್ಲಿ.
ಇಟ್ಟು ಹೋಗಿ ತಂದ ಹೂವು ಹಣ್ಣನ್ನು
ಗೇಟು ತಳ್ಳಿ ಅಲ್ಲೇ ಬದಿಯಲ್ಲಿ.
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ನಂಬು ನಂಬೆಲೆ ಮನವೆ
Next post ಹಸಿರು ಎಲೆಯಲಿ

ಸಣ್ಣ ಕತೆ

  • ಕಲ್ಪನಾ

    ಚಿತ್ರ: ಟಾಮ್ ಬಿ ಇದು ಇಪ್ಪತ್ತು ವರ್ಷಗಳ ಹಿಂದಿನ ಕಥೆ! ಮಾತನಾಡುವ ಸಿನಿಮಾ ಪ್ರಪಂಚ ಅದೇ ಆಗ ದಕ್ಷಿಣ ಭಾರತದಲ್ಲಿ ತಲೆಯೆತ್ತಿದ್ದಿತು! ಸಿನಿಮಾದಲ್ಲಿ ಪಾತ್ರವಹಿಸುವ ನಟಿನಟಿಯರನ್ನು ಅಚ್ಚರಿಯ… Read more…

  • ದೊಡ್ಡವರು

    ಬೀದಿ ಬದಿಯ ಪುಸ್ತಕದ ಅಂಗಡಿ ಪ್ರಭಾಕರನನ್ನು ಅರಿಯದವರು ಬಹಳ ವಿರಳ. ತಳ್ಳೋ ಗಾಡಿಯ ಮೇಲೆ ದೊಡ್ಡ ಟ್ರಂಕನ್ನಿಟ್ಟು ನಿಧಾನವಾಗಿ ತಳ್ಳಿಕೊಂಡು ಬರುವ ಪ್ರಭಾಕರ ಕೆನರಾ ಬ್ಯಾಂಕಿನ ರಸ್ತೆಬದಿ… Read more…

  • ಅವಳೇ ಅವಳು

    ಇತ್ತೀಚೆಗೆ ಅವಳೇಕೋ ತುಂಬಾ ಕಾಡುತ್ತಿದ್ದಾಳೆ- ಮೂವತ್ತು ವರ್ಷಗಳೇ ಸಂದರೂ ಮರೆಯಾಗಿಲ್ಲ ಜೀವನದಲ್ಲಿ ಅದೆಷ್ಟೋ ನಡೆಯಬಾರದ ಅಥವಾ ನಡೆಯಲೇಬೇಕಾದ ಅನೇಕ ಘಟನೆಗಳು ನಡೆದು ಹೋಗಿವೆ. ದೈಹಿಕವಾಗಿ, ಮಾನಸಿಕವಾಗಿ, ವ್ಯಾವಹಾರಿಕವಾಗಿ,… Read more…

  • ಎರಡು ಪರಿವಾರಗಳು

    ಇದು ಎರಡು ಪರಿವಾರದ ಕತೆ. ಒಂದು ಹಕ್ಕಿ ಪರಿವಾರ, ಇನ್ನೊಂದು ಮನುಷ್ಯ ಪರಿವಾರದ್ದು. ಒಂದು ಸುಂದರ ತೋಟ; ವಿಧವಿಧದ ಗಿಡ ಮರಗಳು; ಅವುಗಳ ಕವಲು ಬಿಟ್ಟ ರೆಂಬೆಗಳಲ್ಲಿ… Read more…

  • ಸ್ವಯಂಪ್ರಕಾಶ

    ಇಸ್ತ್ರೀ ಇಲ್ಲದ ಸೀರೆ, ಬಾಚದ ತಲೆ... ಕೈಯಲ್ಲಿ ಚೀಲದ ತುಂಬ ತರ್ಕಾರಿಗಳೊಂದಿಗೆ ಮಾರುಕಟ್ಟೆಯಿಂದ ಹೊರಗೆ ಬರುವುದು ಭ್ರಮರೆ’ಯೇ... ಕಂಡು ತುಂಬಾ ಆಶ್ಚರ್ಯವಾಯಿತು. ರೋಡಿನ ಈ ಕಡೆ ಕಾರು… Read more…

cheap jordans|wholesale air max|wholesale jordans|wholesale jewelry|wholesale jerseys